ಬುಧವಾರ, ಏಪ್ರಿಲ್ 23, 2014

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.

5 ಕಾಮೆಂಟ್‌ಗಳು:

  1. 'ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ'
    ಅಭಾಸದ ನಿಜಾವರ್ಣ ಇಲ್ಲಿದೆ.
    ನಮ್ಮ ಮನೋಶುದ್ಧಿಯೇ ನಿಮ್ಮ ಕವನದ ಧರ್ಮ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ashokkodlady
      Nagarj Sir,
      Nimma kavanatumbaa tumbaa chennagide...arthapurna, bhavapurna, praasapurna, sundara kavana...nimmella barahagalannu odta iddini....ellavu tumbaa chennagive....nimma blog nnu follow maado kondi ellu kaanisilla....settings nalli change maadi....nimma blog ge baroru jaasti aagtaare....nimma Blog Tumbaane chennagide....

      ಕವಿ ನಾಗರಾಜ್
      ಧನ್ಯವಾದ, ಅಶೋಕಕೊಡ್ಲಾಡಿಯವರೇ.

      ವೇದಸುಧೆ ಬಳಗ
      [ಮನೆಮಂದಿಯೇ ಮೊದಲು ಹೀಗಳೆಯುವವರು]
      ಇಷ್ಟೊಂದು ನೇರಮಾತು ಬೇಡ ನಾಗರಾಜ್.
      ಉಳಿದದ್ದೆಲ್ಲಾ ಅನುಭವಾಮೃತ.
      -ಶ್ರೀಧರ್

      KAVI SURESH, SHIMOGA
      ನಿನ್ನ ದನಿಗೆ ನಾನೂ ದನಿಗೂಡಿಸಬಲ್ಲೇ ಅಷ್ಟೇ. ಸರಿಪಡಿಸಲಾಗದ್ದಕ್ಕೆ ಅನುಭವಿಸದೇ ಅನ್ಯ ಮಾರ್ಗವಿಲ್ಲ. ಕವನ ಚೆನ್ನಾಗಿ ಬಂದಿದೆ.

      ಕವಿ ನಾಗರಾಜ್
      ನಿಮ್ಮ ಅನಿಸಿಕೆಯಂತೆ ಬದಲಾವಣೆ ಮಾಡಿರುವೆ, ಶ್ರೀಧರ್.

      ಅಳಿಸಿ
  2. ನೋವು ಕವನದಳ್ಳಿಯುವಂತೆ ನಲಿವು ಇಳಿಯಲು ಸೋಲುತ್ತದೆ.ನಿಮ್ಮ ಕವನವು ನಿಮ್ಮ ಅನುಭವಾಮೃತ.ಅನುಭವ ನೀಡಿದವರಿಗೆ ಧನ್ಯವಾದ ಹೇಳಿಬಿಡೋಣ.ಸಹನೆಯ ಕಟ್ಟೆ ಒಡೆಯುವವರೆಗೂ ನೋವಿಗೆ ಕಾರಣರಾದವರಿಗೆ ಬುದ್ಧಿ ಬರಲೇ ಇಲ್ಲವಲ್ಲಾ! ಇನ್ನು ಕೊರಗಿ ಉಪಯೋಗವಿಲ್ಲ.ಯಾರಿಗೆ ಯಾರೂ ಇಲ್ಲ.ಅವನ ಅಣತಿಯಂತೆ ನಡೆಯೋಣ ಎಲ್ಲ.

    ಪ್ರತ್ಯುತ್ತರಅಳಿಸಿ
  3. ನೋವು ಕವನದಳ್ಳಿಯುವಂತೆ ನಲಿವು ಇಳಿಯಲು ಸೋಲುತ್ತದೆ.ನಿಮ್ಮ ಕವನವು ನಿಮ್ಮ ಅನುಭವಾಮೃತ.ಅನುಭವ ನೀಡಿದವರಿಗೆ ಧನ್ಯವಾದ ಹೇಳಿಬಿಡೋಣ.ಸಹನೆಯ ಕಟ್ಟೆ ಒಡೆಯುವವರೆಗೂ ನೋವಿಗೆ ಕಾರಣರಾದವರಿಗೆ ಬುದ್ಧಿ ಬರಲೇ ಇಲ್ಲವಲ್ಲಾ! ಇನ್ನು ಕೊರಗಿ ಉಪಯೋಗವಿಲ್ಲ.ಯಾರಿಗೆ ಯಾರೂ ಇಲ್ಲ.ಅವನ ಅಣತಿಯಂತೆ ನಡೆಯೋಣ ಎಲ್ಲ.

    ಪ್ರತ್ಯುತ್ತರಅಳಿಸಿ