ಬುಧವಾರ, ಅಕ್ಟೋಬರ್ 12, 2016

ಮೂಢ ಉವಾಚ - 216

ರಾಗರಹಿತ ಮನ ದೀಪದ ಕಂಬವಾಗಿ 
ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |
ದೇವನ ನೆನೆವ ಮನ ಬತ್ತಿಯನು ಹಚ್ಚಲು
ಜ್ಞಾನಜ್ಯೋತಿ ಬೆಳಗದಿಹುದೆ ಮೂಢ ||




ಭಾನುವಾರ, ಅಕ್ಟೋಬರ್ 2, 2016

ಮೂಢ ಉವಾಚ - 215

ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||