ಬುಧವಾರ, ಜನವರಿ 31, 2018
ಶನಿವಾರ, ಜನವರಿ 27, 2018
ಶುಕ್ರವಾರ, ಜನವರಿ 26, 2018
ಮಾಡಿದ್ದುಣ್ಣೋ ಮಹರಾಯ! - As you sow, so shall you reap!
ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||
ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||
ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||
ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||
ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||
ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||
ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
ಅರ್ಥ: ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.
ಮಂಗಳವಾರ, ಜನವರಿ 23, 2018
ಶುಕ್ರವಾರ, ಜನವರಿ 19, 2018
ಗುರುವಾರ, ಡಿಸೆಂಬರ್ 21, 2017
ಮೂರನೆಯವನಾಗು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ಪ ||
ಒಂದನೆಯವನ ಮಹತಿಯನರಿಯಲು
ಎರಡನೆಯವನ ಗೂಢವ ತಿಳಿಯಲು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೧ ||
ಅವನೇ ಇವನೋ ಅವನಿಂದಿವನೋ
ಮಾಯದ ಮರ್ಮವನರಿಯಲು ನೀನು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೨ ||
ನಿನ್ನಯ ಸೊಬಗನು ನೀನೇ ಕಾಣಲು
ನಿನ್ನಯ ದನಿಯನು ನೀನೇ ಕೇಳಲು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೩ ||
ನಿನ್ನನು ನೀನೇ ತಿಳಿಯದೆ ಇರಲು
ಅವನನ್ನೆಂತು ಅಳೆಯುವೆ ನೀನು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೪ ||
ಅವನನು ಅವನ ಪಾಡಿಗೆ ಬಿಟ್ಟು
ಇವನಿಗೆ ಇವನ ಕೆಲಸವ ಕೊಟ್ಟು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೫ ||
ಸಚ್ಚಿದಾನಂದನು ಒಬ್ಬನೆ ಒಬ್ಬನು
ಕರುಣಾಸಾಗರನೊಲುಮೆಯ ಪಡೆಯಲು
ಮೂರನೆಯವನಾಗೋ ಮೂಢ
ಮೂರನೆಯವನಾಗೋ || ೬ ||
-ಕ.ವೆಂ.ನಾಗರಾಜ್.
ಬುಧವಾರ, ನವೆಂಬರ್ 1, 2017
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)









