ಕವಿಮನದಾಳದಿಂದ
ಶನಿವಾರ, ಏಪ್ರಿಲ್ 15, 2017
ಮೂಢ ಉವಾಚ - 228
ಕುಜನರೊಡನಾಡಿ ವಂಚನೆಯ ಗೈಯುವನು
ಪರರ ನೋವಿನಲಿ ಆನಂದ ಕಾಣುವನು|
ಆಲಸಿಕ ತಾನಾಗಿ ಪಶುವಿನಂತಾಡುವನು
ಅಯುಕ್ತನವನಸುರನೋ ಮೂಢ||
ಬುಧವಾರ, ಏಪ್ರಿಲ್ 12, 2017
ಮೂಢ ಉವಾಚ - 227
ನಾನೇ ಎಲ್ಲ ನಾನಿಲ್ಲದಿರಿಲ್ಲವೆಂಬಹಮಿಕೆ
ಪರರ ಜರೆವ ಗುಣ ಗುರುಹಿರಿಯರೆನದೆ|
ಬಯಸಿರಲು ಸಿಗದಿರೆ ಉಮ್ಮಳಿಪ ಕೋಪ
ಅಸೂಯೆ ಅಸುರರ ಆಸ್ತಿ ಮೂಢ||
ಮಂಗಳವಾರ, ಏಪ್ರಿಲ್ 11, 2017
ಮೂಢ ಉವಾಚ - 226
ಅಸುರರೆಲ್ಲಿಹರೆಂದು ಅರಸುವುದು ತರವೆ
ಅತಿಮಾನ ತೋರಿ ಮದದಿ ಮೆರೆಯುವರು|
ಹಿರಿಯರನೆ ನಿಂದಿಸಿ ಡಂಭ ತೋರುವರು
ಪರರ ನೋಯಿಪರು ಅಸುರರೇ ಮೂಢ||
ಸೋಮವಾರ, ಏಪ್ರಿಲ್ 10, 2017
ಮೂಢ ಉವಾಚ - 225
ಗುರಿಯ ತಲುಪಲು ಕುಟಿಲೋಪಾಯ ಮಾಡಿ
ಪರರ ಮೆಚ್ಚ್ಚಿಸಲು ಡಂಭದಾಚರಣೆಯ ಮಾಡಿ |
ಕಾಮರಾಗಬಲದಿಂ ಕೀಳು ಫಲಕಾಗಿ ಹಂಬಲಿಪ
ಅಹಂಕಾರಿಗಳು ಸಾಧಕಾಸುರರು ಮೂಢ ||
ಭಾನುವಾರ, ಏಪ್ರಿಲ್ 9, 2017
ಮೂಢ ಉವಾಚ - 224
ಬಿತ್ತಿದಾ ಬೀಜದೊಲು ಬೆಳೆಯು
ನೋಡುವ ನೋಟ ಕೇಳುವ ಮಾತು |
ಆಡುವ ಮಾತು ಸೇವಿಪಾಹಾರ
ಸಾತ್ವಿಕವಿರೆ ಸಾತ್ವಿಕನು ನೀ ಮೂಢ ||
ಶನಿವಾರ, ಏಪ್ರಿಲ್ 8, 2017
ಮೂಢ ಉವಾಚ - 223
ನೊಂದಮನಕೆ ಶಾಂತಿಯನು ನೀಡುವುದು
ಮನವ ನೋಯಿಸಿ ನರಳಿಸುವುದು ನಾಲಿಗೆ|
ಜೀವವುಳಿಸೀತು ಹಾಳುಗೆಡವೀತು
ನಾಲಿಗೆಯದೆರಡಲಗಿನ ಕಠಾರಿ ಮೂಢ||
ಮೂಢ ಉವಾಚ - 222
ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು
ಭದ್ರ ಹೃದಯವನು ಛಿದ್ರವಾಗಿಸಬಹುದು|
ಮನ ಮನೆಗಳ ಮುರಿದು ಕ್ಲೇಶ ತರಬಹುದು
ಕೆನ್ನಾಲಿಗೆಯ ತಣಿಪುದೆಂತೋ ಮೂಢ||
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)