ಬುಧವಾರ, ಜುಲೈ 2, 2014

ಜಿಹಾದ್ !!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್|
ಒಳಗಿನ ಮೊರೆಯಿದು, ಜಿಹಾದ್ ಜಿಹಾದ್|

ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು,
ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು
ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ,
ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ,
ವೈರಿಗಳ ತರಿಯೋಣ ಜಿಹಾದ್ ಜಿಹಾದ್|

ನರರ ತರಿದು ಗೆಲ್ವೆನೆಂದು ಕಾಣದಿರು ಕನಸು
ಕಸುವಿದ್ದರೆ ಒಳಗಿರುವ ವೈರಿಯನ್ನು ಮಣಿಸು
ಮೋಹ ಕೊರಳಿಗುರುಳು ಕುಣಿಕೆಯನ್ನು ಸರಿಸು
ಹರಿಹರಿದು ತಿನ್ನುತಿಹ ಮದವ ಮೆಟ್ಟಿ ಕೊಲ್ಲು
ಕೊಲ್ಲೋಣ ಕೊಲ್ಲೋಣ ಜಿಹಾದ್ ಜಿಹಾದ್!

ಬಾಂಬು ಹಾಕಿ ವಿಷವನಿಕ್ಕಿ ಮಾಡಿದ್ದೇನು ನೀನು
ಮತ್ಸರದ ಕೊರಳನಮುಕಿ ಹಿಡಿಯಬಲ್ಲೆಯೇನು
ಅಡಗಿರುವ ಲೋಭವನ್ನು ಹುಡುಕಬಲ್ಲೆಯೇನು
ವೀರ ಶೂರನಾದರೆ ಹಿಡಿದು ಎಳೆದು ಸಾಯಿಸು
ಮೆಟ್ಟೋಣ ಕುಟ್ಟೋಣ ಜಿಹಾದ್ ಜಿಹಾದ್!


-ಕ.ವೆಂ.ನಾಗರಾಜ್.
**************
5.10.2014ರ ವಿಕ್ರಮದ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟಿತ:


4 ಕಾಮೆಂಟ್‌ಗಳು:

  1. ಮನಸ್ಸಿನಾಳದಿ ಅಡಗಿ ಕುಳಿತ ಅರಿಷಡ್ ವೈರಿಗಳ ವಿರುದ್ದ ತಾವು ಸಾರಿದ ಈ ಜಿಹಾದ್ ವಿಭಿನ್ನವಾಗಿದೆ.

    ಪ್ರತ್ಯುತ್ತರಅಳಿಸಿ
  2. ಪ್ರತ್ಯುತ್ತರಗಳು
    1. Nagalakshmi Kadur
      ಹೌದು ನಮ್ಮಲ್ಲಿರುವ ವಿಷವ ಹೊರದೂಡದೇ ಅಮೃತ ರುಚಿಸದು, ಸವಿಯಲಾಗದು. ಕ್ರೋಧದಿಂದ ಎಲ್ಲವನ್ನೂ ಗೆಲ್ಲಲಾಗದು

      prathap.brahmavar
      ನಿಜ ಸರ್ , ಕೊಲ್ಲ್ಬೇಕಾದುದು ನಮ್ಮೊಳಗಿನ ವ್ಯರಿಗಳನ್ನ... ಮಾಸ್ತರರೊಬ್ಬರು ಬುದ್ಧಿ ಹೇಳಿದಂತಿದೆ ನಿಮ್ಮ ಕವಿತೆ :-) ಅಭಿನಂದನೆಗಳು ಸರ್

      ಕವಿ ನಾಗರಾಜ್4
      :)) ಸವಿ ಪ್ರತಿಕ್ರಿಯೆಗೆ ಧನ್ಯವಾದಗಳು, ಪ್ರತಾಪರೇ.

      ಅಳಿಸಿ